Slide
Slide
Slide
previous arrow
next arrow

ಅಗ್ನಿವೀರ್ ಆಕಾಂಕ್ಷಿಗಳ ಜೊತೆ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

300x250 AD

ಕುಮಟಾ: ಪಟ್ಟಣದ ಬಾಳಿಗಾ ಕಾಲೇಜಿನ ಮೈದಾನದಲ್ಲಿ ಅಗ್ನಿವೀರರಾಗಿ ಸೈನ್ಯಕ್ಕೆ ಸೇರುವ ಕನಸನ್ನು ಹೊತ್ತ ಅಭ್ಯರ್ಥಿಗಳೊಂದಿಗೆ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಸಿಹಿ ವಿತರಿಸುವ ಮೂಲಕ ಕಾರ್ಗಿಲ್ ವಿಜಯ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇಲ್ಲಿನ ಯುವ ಬ್ರಿಗೇಡ್ ವತಿಯಿಂದ ಬಾಳಿಗಾ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯಲಾಯಿತು. ಅಗ್ನಿವೀರರಾಗಿ ಸೈನ್ಯಕ್ಕೆ ಸೇರುವ ಕನಸನ್ನು ಹೊತ್ತ ಅಭ್ಯರ್ಥಿಗಳು ಕೂಡ ನಿವೃತ್ತ ಸೈನಿಕರಾದ ನವೀನ ನಾಯ್ಕ ಅವರ ನೇತೃತ್ವದಲ್ಲಿ ಭಾರತ ಮಾತೆಗೆ ನಮನ ಸಲ್ಲಿಸಿ, ದೈಹಿಕ ಕಸರತ್ತನಲ್ಲಿ ತೊಡಗಿಕೊಂಡರು.

300x250 AD

ಸುಮಾರು 80ಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿ ತರಬೇತಿ ಪಡೆಯುತ್ತಿದ್ದು, ಇವರೆಲ್ಲರ ಕನಸುಗಳು ನನಸಾಗಲೆಂದು ಕುಮಟಾದಿಂದ ಹೆಚ್ಚು ಅಭ್ಯರ್ಥಿಗಳು ಸೈನ್ಯಕ್ಕೆ ಸೇರಲೆಂದು ಯುವಾ ಬ್ರಿಗೇಡ್ ಕಡೆಯಿಂದ ಶುಭ ಹಾರೈಸಲಾಯಿತು.

Share This
300x250 AD
300x250 AD
300x250 AD
Back to top